ಅಹಿಂಸಾ ಸಮ್ಮಿಲನ


ಸುಹಾಸ್ತಿ ಯುವ ಜೈನ್ ಮಿಲನ್ ಹಾಗೂ ಕರ್ನಾಟಕದಲ್ಲಿ ಜೈನ ಧರ್ಮ ಬಳಗದ ಜಂಟಿ ಆಯೋಜನೆಯ *#ಜಿನಸಮ್ಮಿಲನ* ಕಾರ್ಯಕ್ರಮದ ಅಂಗವಾಗಿ‌ ವಿವಿಧ *#ಸಮ್ಮಿಲನ* ಎಂಬ ಕಾರ್ಯಕ್ರಮ ಆನ್ಲೈನ್ ‌ಮಾಧ್ಯಮದ ಮೂಲಕ ನಡೆಯಲಿದೆ. ಇದರ ಅಂಗವಾಗಿ ಇದೇ ಜನವರಿ 5 ರಂದು ಸಂಜೆ 07.30 ಕ್ಕೆ ಆನ್ಲೈನ್ ಮಾಧ್ಯಮದ ಮೂಲಕ ನಡೆಯಲಿದೆ.

*#ಧಾರ್ಮಿಕ_ಸಾಮಾಜಿಕ_ಮುಖಂಡರ_ಸಮಾಗಮ*

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಅನೇಕ ಧಾರ್ಮಿಕ ನೇತಾರರು , ಮುಖಂಡರು ಭಾಗವಹಿಸಲಿದ್ದಾರೆ. ಮೂಡುಬಿದಿರೆ ಜೈನ ಮಠದ ಪರಮ ಪೂಜ್ಯ ಚಾರುಕೀರ್ತಿ ಮಹಾ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಿ‌ ಆಶೀರ್ವಚನಗೈಯಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ‌ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಉದ್ಘಾಟನೆ ಮಾಡಲಿದ್ದಾರೆ. ಉಡುಪಿಯ ಪೇಜಾವರ ಮಠದ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶಾಂತಿ ಪ್ರಕಾಶನ ಸಂಸ್ಥೆ ಮಂಗಳೂರು ಇದರ ಮುಖ್ಯಸ್ಥರಾದ ಮಹಮ್ಮದ್ ಕುಂಞ , ಹಾಗೂ ಮಡಂತ್ಯಾರ್ ಸೆಕ್ರೇಟ್ ಹಾರ್ಟ್ ಚರ್ಚಿನ ಧರ್ಮಗುರು‌ ವಂ | ಸ್ವಾಮಿ ಬೇಸಿಲ್ ವಾಸ್ ಆಶೀರ್ವಚನ ನೀಡಲಿದ್ದಾರೆ. ಸಚಿವರಾದ ಶ್ರೀ ಸುನೀಲ್ ಕುಮಾರ್, ಮಾಜಿ ಸಚಿವ ಯು ಟಿ ಖಾದರ್ ಹಾಗೂ ಶಾಸಲ ಹರೀಶ್ ಪೂಂಜ ಬೆಳ್ತಂಗಡಿ ‌ಇವರುಗಳು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯನ್ನು ಒದಗಿಸಲಿದ್ದಾರೆ.

*#ಅಹಿಂಸೆಯ_ಝೇಂಕಾರ_ಮೊಳಗಲಿದೆ*

ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳು ಅಹಿಂಸೆಯನ್ನೇ ಬೋಧಿಸಿವೆ. ಮಾನವ ಕಲ್ಯಾಣಕ್ಕೆ ಪ್ರತಿಯೊಂದೂ ಧರ್ಮಗಳು ಒತ್ತು ನೀಡಿವೆ. ಹಾಗಾಗಿ ಇಂದು ಜಗತ್ತು ವಿವಿಧ ಮತ ಧರ್ಮಗಳ , ವಿವಿಧ ಭಾಷೆಗಳ ನಡುವೆ, ವಿವಿಧ ಸಂಸ್ಕೃತಿಗಳ ಮಧ್ಯೆ ದೇದಿಪ್ಯಮಾನವಾಗಿ ಬೆಳಗುತ್ತಿದೆ. 

*#ಕರ್ನಾಟಕದಲ್ಲಿ_ಜೈನ_ಧರ್ಮ_ಫೇಸ್ಬುಕ್_ಪೇಜ್ ನಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಹಿಂಸೆಯ ತೇರನ್ನು ಎಳೆಯೋಣ.

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...