ಶ್ರೀ ಅಜಿತ ಅಪ್ಪಾಸಾಹೇಬ ಮುರಗುಂಡೆ ಅವರ  ಪರಿಚಯ

ಜೈನ ಸಾಹಿತಿ,ಸಾಧಕರನ್ನು ಪರಿಚಯಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿರುವ  ಶ್ರೀ ಅಜಿತ ಅಪ್ಪಾಸಾಹೇಬ ಮುರಗುಂಡೆ ಅವರನ್ನು  ಪರಿಚಯಿಸಬೇಕು ಎಂಬ ನನ್ನ ಆಸೆಗೆ ಸರಿಯಾದ ಸಮಯ ಈಗ ಬಂದಿದೆ ಕಾರಣ ಇತ್ತೀಚೆಗೆ ಅವರು ಬಡ್ತಿ ಪಡೆದು (ಸಂಶೋಧನಾಧಿಕಾರಿ ಭಾಷಾಂತರ ನಿರ್ದೇಶನಾಲಯ) ಪ್ರಸ್ತುತ ವಿಧಾನ ಪರಿಷತನ ಸಚಿವಾಲಯದ ಭಾಷಾಂತರ ಶಾಖೆಯ ಅಧೀನ ಕಾರ್ಯದರ್ಶಿ ಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ 'ಪದ್ಮಾವತಿ ಉಗಾರ' ದ ಕೃಷಿ ಕುಟುಂಬದಲ್ಲಿ ಜನಿಸಿದವರು.ಬೆಲ್ಲದ ಬಾಗೇವಾಡಿಯ ಗುರುಕುಲದಲ್ಲಿ ಧಾರ್ಮಿಕ ಹಾಗೂ ಮಾಧ್ಯಮಿಕ ಶಿಕ್ಷಣ , ಚಿಕ್ಕೋಡಿಯ ಬಿ ಕೆ ಕಾಲೇಜಿನಿಂದ ಪ್ರಥಮ ರಾಂಕನಲ್ಲಿ ಪದವಿ ಶಿಕ್ಷಣ, ಕರ್ನಾಟಕ ವಿ ವಿ ಧಾರವಾಡದಲ್ಲಿ ಉಚ್ಚ ಪದವಿ, ಜೈನಾಲಾಜಿ ಡಿಪ್ಲೊಮ , ಪ್ರಾಚ್ಯ ಲೇಖನ ಅಧ್ಯಯನ ಡಿಪ್ಲೊಮಾ ಹಾಗೂ ಪಿ.ಎಚ್.ಡಿ ಯನ್ನೂ ಪಡೆದಿದ್ದಾರೆ.. ನಿರಂತರ ಅಧ್ಯಯನ ಬರವಣಿಗೆಯಲ್ಲಿ ತೊಡಗಿರುತ್ತಾರೆ.ಅವರ
'ಅಕ್ಷಾಂತ' ಮೊನ್ನೆ ಪ್ರಕಟಿಸಿದ ಮೊದಲ ಕೃತಿ. ಪೊನ್ನನ ಶಾಂತಿ ಪರಾಣ ಒಂದು ಅಧ್ಯನ,ಶ್ರಾವಕರ ಆಚಾರ-ವಿಚಾರ, ಶ್ರೀ ಉಗಾರ ಪದ್ಮಾವತಿ ಮಹಾತ್ಮೆ, ರತ್ನಾಕರನ ಹಾಡುಗಳು, ಗುಣಾರಾಧನೆ ಹಾಗೂ  ಯುವಾಚಾರ್ಯ ಕೃತಿಗಳು ಅಚ್ಚಿನಲ್ಲಿವೆ. ತಮ್ಮ ಕೆಲಸದ ಒತ್ತಡದಲ್ಲಿಯೂ ಸಾಧನೆಯ  ಕನಸುಗಳನ್ನು ಹೊತ್ತು  ಸ್ವಾಧ್ಯಾಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ
ಅವರ ಕನಸಿನ 'ಕರ್ನಾಟಕದ ಸಮಗ್ರ ಜೈನ ಸಾಹಿತ್ಯ ಮತ್ತು ಇತಿಹಾಸ' ಸಂಪುಟವನ್ನು  ಬಿಂದುವಿನಲ್ಲಿ ಸಿಂಧು ಎನ್ನುವಹಾಗೆ  ಹಾಗೆ ಒಂದೇ ಸಂಪುಟದಲ್ಲಿ ತರುವ ಮಹದಾಸೆ ಈ ಕೆಲಸಕ್ಕೆ ಅಂತಿಮ ಸ್ವರೂಪ ನೀಡುತ್ತದ್ದಾರೆ. ಕರ್ನಾಟಕ ಜೈನ ನೌಕರರನ್ನು ಸಂಘಟಿಸುವ , ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ  ಕೆಲಸ ಮಾಡಬೇಕು ಎಂಬುದು ಅವರ ದ್ಯೇಯ. ಅವರ ಎಲ್ಲಾ ಕನಸುಗಳು ನನಸಾಗಲಿ ಎಂದು ಹಾರೈಸಿ ಅವರು ಮುಂಬಡ್ತಿ ಪಡೆದಿದ್ದಕ್ಕಾಗಿ ಅವರನ್ನು ಅಭಿನಂದಿಸಿ ಇನ್ನೂ ಹೆಚ್ಚಿನ ಹುದ್ದೆಗಳನ್ನು ಅಲಂಕರಿ ಸಮಾಜಮುಖಿ ಕೆಲಸಗಳನ್ನು ಮಾಡುವಂತಾಗಲಿ ಆ ಶಕ್ತಿ ಭಗವಂತ ನೀಡಲಿ ಅಂತ ಹಾರೈಸೋಣ..

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...