ಕಾನೂರು ಬಸದಿ

ಕಾನೂರು ಬಸದಿ ಜೈನರ ಹೆಮ್ಮೆ ಎನಿಸುವ ರಾಣಿ ಚೆನ್ನಬೈರವದೇವಿ ಕಾಲಾವಧಿಯಲ್ಲಿ ಮತ್ತು ಅವರ ಹಿಂದಿನ ತಲೆಮಾರು ಆಡಳಿತ ಅವಧಿಯಲ್ಲಿ ಮಲೆನಾಡಿನ ಸುತ್ತಮುತ್ತ ಅಂದರೆ ಗೇರುಸೊಪ್ಪ ಭಟ್ಕಳ ಹಾಡುವಳ್ಳಿ ಸಾಗರ ತಾಲೂಕಿನ ಹಾರಿಗೆ ಈಗ ಲಿಂಗನಮಕ್ಕಿ ಡ್ಯಾಮ್ ನಿಂದ ಮುಳುಗಡೆ ಆಗಿರುವ  ಪ್ರದೇಶ ಸೇರಿದಂತೆ ಸುತ್ತಮುತ್ತಲು ಹಲವಾರು ಜೈನ ಬಸದಿಗಳು ನಿರ್ಮಾಣ ಆಗಿವೆ.






 ಅಂತಹದ್ದೇ ಒಂದು ವಿಶೇಷ ಬಸದಿ  ಕಾನೂರು ಬಸದಿ ಇದು ಕಲ್ಲಿನದಾಗಿತ್ತು ಸಂಪೂರ್ಣ ಜೀರ್ಣಾವಸ್ಥೆಗೆ ತಲುಪಿದ್ದ ಈ ಬಸದಿಯನ್ನು 2006ರಲ್ಲಿ ಸ್ಥಳೀಯರು ಹಾಗು ಮೂಡುಬಿದಿರೆ ಮತ್ತು ಕನಕಗಿರಿ ಸ್ವಾಮೀಜಿಯವರ ನೇತ್ರತ್ವದಲ್ಲಿ ಜೀರ್ಣೋದ್ದಾರ ಮಾಡಿ ಪಂಚಕಲ್ಯಾಣ ಪ್ರತಿಷ್ಠಾಪನೆ ಮಾಡಲಾಗಿದೆ.

  ಅಂದಹಾಗೆ ಮೂಡಬಿದ್ರೆ ಮಠದ ವ್ಯಾಪ್ತಿಗೆ ಬರುವ ಈ ಬಸದಿಯಲ್ಲಿ ಮಹಾವೀರ ಮತ್ತು ಪಾರ್ಶನಾಥ ತೀರ್ಥಂಕರರ ಎರಡೆರಡು ಜಿನ ಬಿಂಬಗಳು ಶಾಂತಿನಾಥ ತೀರ್ಥಂಕರ 1 ಜಿನಬಿಂಬ ಕುಷ್ಮಂಡಿನಿ ಪದ್ಮಾವತಿ ಜ್ವಾಲಾಮಾಲಿನಿ ದೇವಿ ಮೂರ್ತಿಗಳು ಇದ್ದು ನಿತ್ಯ ಪೂಜೆಯನ್ನು ಶ್ರಾವಕರು ಮಾಡುತ್ತಾರೆ. ಸುತ್ತಮುತ್ತಲು ಕೆಲವೇ ಕೆಲವು ಜೈನ ಮನೆಗಳಿರುವ ಈ ಬಸದಿಯನ್ನು ಅತ್ಯಂತ ಸುಚಿಯಾಗಿ ನೋಡಿಕೊಂಡಿದ್ದಾರೆ ಇಲ್ಲೇ ಸಮೀಪ ಕಾನೂರು ಕೋಟೆ ಇದ್ದು ಜೈನ ಮನೆತನದ ಪ್ರಾಣಿ ಆಳಿದ ಕಥೆಯನ್ನು ಸಾರುತ್ತಿದೆ. ಪ್ರಸ್ತುತ ಭಾರತ ಸರ್ಕಾರದ ಮೀಸಲು ಅರಣ್ಯ ವ್ಯಾಪ್ತಿಗೆ ಬರುವ ಈ ಕೋಟೆಯನ್ನು ನೋಡಲು ಅರಣ್ಯ ಇಲಾಖೆಯ ಪರವಾನಿಗೆಯನ್ನು ಪಡೆದುಕೊಳ್ಳಬೇಕು ಆದರೆ ಬಸದಿಯನ್ನು ನೋಡಲು ತೊಂದರೆ ಇಲ್ಲ ನೀವು ಇಲ್ಲಿಗೆ ಹೋಗಬಯಸಿದರೆ ಕಾನನದ ಮಧ್ಯೆ ಹೋಗುವ ನಿಮಗೆ ವಿಶೇಷ ಅನುಭವ ಸಿಗುತ್ತದೆ ಜೋಗ ಜಲಪಾತ ಸಾಗರಕ್ಕೆ ಭೇಟಿಕೊಡುವ ನೀವು ಸಾಧ್ಯವಾದರೆ ಒಮ್ಮೆ ಭೇಟಿ ಕೊಡಿ ಧನ್ಯವಾದ ಗಳೊಂದಿಗೆ
ಚಿತ್ತಾ ಜಿನೇಂದ್ರ ಎಂ ಎಂ.

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...