ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಯಿಂದ ಮಹಾವೀರ ವಾಣಿ ಬಿಡುಗಡೆ



ಮಹಾವೀರರು ಅನೇಕ ಪರಿಣಾಮಕಾರಿ ತತ್ವಗಳನ್ನು ಜಗತ್ತಿಗೆ ನೀಡಿದ್ದಾರೆ. ಅದರಲ್ಲೂ ಮಹಾವೀರರು ಹೇಳಿದ ಮಾನವೀಯ ಸಂದೇಶಗಳು ಕೇವಲ ಜೈನ  ಮತಾವಲ0ಭಿಗಳಿಗೆ  ಮಾತ್ರವಲ್ಲ ಇಡೀ ವಿಶ್ವಕ್ಕೆ ಅದರ ಅವಶ್ಯಕತೆ ಇದೆ,
ಭಾರತ ತುಂಬಾ ಶಾಂತಿಪ್ರಿಯ ದೇಶ. ಜೈನಧರ್ಮದ ಅತ್ಯಂತ ಅರ್ಥಪೂರ್ಣ ವಿಚಾರ ಧಾರೆಗಳನ್ನು ತಿಳಿದು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಇನ್ನೂ ಶ್ರೇಷ್ಠವಾಗಿ ಬದುಕಬಹುದು . ಅದಷ್ಟೇ ಅಲ್ಲದೆ ಜೈನರು ಅಹಿ0ಸಾ ಪ್ರಿಯರು. ಈ  ಕರೋನ ವೈರಸ್ ಭೀತಿಯ ಸಂದರ್ಭದಲ್ಲೂ ಅಹಿಂಸಾ ಜೀವನ  ಶೈಲಿಯ ಬಗ್ಗೆ ಯೋಚಿಸಿ ಜೈನಧರ್ಮದ  ತತ್ವ ಸಿದ್ಧಾಂತಗಳನ್ನು ಇಂತಹ ಸಂದರ್ಭದಲ್ಲಿ ಅಳವಡಿಸಿಕೊಳ್ಳುವ ಅಗತ್ಯ  ಪ್ರತಿಯೊಬ್ಬರಿಗೂ ಇದೆ ಎಂದು   ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಚಿತ್ರಕಲಾವಿದ ಜಿನೇಂದ್ರ ಜೈನ್ ಪರಿಕಲ್ಪನೆಯಲ್ಲಿ ಮೂಡಿಬಂದ ಮಹಾವೀರನ ವಾಣಿ ಸಂಗ್ರಹಿತ ಸಂದೇಶವನ್ನು  ಬಿಡುಗಡೆ ಮಾಡುತ್ತಾ ಹೇಳಿದರು.ಕಲಾವಿದ ಜಿನೇಂದ್ರ ಜೈನ್ ಯುವ ಲೇಖಕಿ ಶ್ವೇತಾ ನಿಹಾಲ್ ಜೈನ್  ಡಾ. ಅಜಿತ್ ಪ್ರಸಾದ್  ಮತ್ತು ಜಯಲಕ್ಷ್ಮಿ ಅಭಯ್  ಕುಮಾರ್ ರು ಸಂಗ್ರಹಿಸಿ ಬರೆದ
   ಬೋಧನೆಗಳು ಬಿಡುಗಡೆಯಾದವು.

ಚಿಕ್ಕದಾಗಿ ಅತ್ಯಂತ ಅರ್ಥಪೂರ್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸಮಾಜಸೇವಕ ಮಾಳ ಹರ್ಷೇಂದ್ರ ಜೈನ್ ಯುವ ಲೇಖಕಿ ಶ್ವೇತ ನಿಹಾಲ್  ಜೈನ್ ರಶ್ಮಿ ಹರ್ಷೇಂದ್ರ ಜೈನ್ ವರ್ಷ ಜೈನ್ ಸುಜಿನ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...