ಇಂದಿನ ಸಮಾಜ ನೋಡುವ ದೃಷ್ಟಿ ಬದಲಾಗಬೇಕಿದೆ

ನಮಸ್ತೆ ಕೆಲವು ದಿನದಿಂದ ಚೀನಾ ಪ್ರಾಡಕ್ಟ್ ಯೂಜ್ ಮಾಡಬೇಡಿ ಅನ್ನೋ ಅಭಿಯಾನ ಸ್ಟಾರ್ಟ್ ಆಗಿದೆ. ಎಸ್ ಇದು ಒಳ್ಳೆಯದು ಆದರೆ ನಮ್ಮಲ್ಲಿ ಅದೇತರ ಪ್ರಾಡಕ್ಟ್ ರೆಡಿಯಾಗಬೇಕು ಅದು ಹೇಗೆ ಸಾಧ್ಯ? 
    ಸಾಧ್ಯತೆ ಇದೆ. ಅದು ನಮ್ಮ ಯುವಕರನ್ನು ನೀವು ನಂಬಬೇಕು. ಅಂದರೆ  ನಾವು ನೋಡ್ತಾ ಇರೋ ಹಾಗೆ ಚೈನಾದ  ಪ್ರಾಡಕ್ಟ್ ದೊಡ್ಡ ಇನ್ವೆಸ್ಟ್ಮೆಂಟ್ ಇಂದ ಪ್ರಾರಂಭವಾಗಿದ್ದು ಅಂತಲ್ಲ . ಸಣ್ಣ, ಸಣ್ಣ ಇನ್ವೆಸ್ಟ್ಮೆಂಟ್ ಇಂದನೆ ಪ್ರಾರಂಭವಾಗಿದ್ದು ಅನಿಸುತ್ತೆ. ಇಂದಿನ ತಲೆಮಾರು ಅಂದರೆ ಯುವಕರು ಯಾವುದೋ ಕಂಪನಿಯಲ್ಲಿ ಕೆಲಸ ಮಾಡುವುದಕಿಂತ ಸದೃಢ ಸ್ಪಷ್ಟ ಯೋಜನೆಯೊಂದಿಗೆ ಬಿಜಿನೆಸ್ ಗೆ ಕೈಹಾಕಿ ಪ್ರೊಡಕ್ಷನ್ ಗೆ ಮುಖ ಮಾಡಿದರೆ ಖಂಡಿತ ಸಾಧ್ಯತೆ ಇದೆ. ಇಲ್ಲಿ ಇನ್ವೆಸ್ಟ್ ಮೆಂಟ್ ಮಾಡುವವರು  ನಮ್ಮ ಯುವಕರನ್ನು ನಂಬಬೇಕು.  ಸಿನಿಮಾದಲ್ಲಿ ಕೋಟ್ಯಂತರ ರೂಪಾಯಿ ಇನ್ವೆಸ್ಟ್ಮೆಂಟ್ ಮಾಡುವವರು ಸಕ್ಸಸ್ ಆದರೆ ಅದು ಒಂದು ಬಾರಿ ಮಾತ್ರ ರಿಟರ್ನ್ ಸಾಧ್ಯ. ಆದರೆ ಯಾವುದೋ ಪ್ರಾಡಕ್ಟ್ ಬಿಜಿನೆಸ್ ಕಂಪನಿ ಹಾಗಲ್ಲ ಇದು ಸಕ್ಸಸ್ ಆದರೆ ಲಾಂಗ್ ಟೈಮ್ ರಿಟರ್ನ್ ಕೊಡುತ್ತೆ ಅದರೊಂದಿಗೆ ನೂರಾರು ಜನಕ್ಕೆ ಕೆಲಸವನ್ನು ಒದಗಿಸುವ ಸಾದ್ಯತೆ ಇರುತ್ತೆ‌. ಹಾಗಂತ ಸಿನಿಮಾ ಮಾಡಬೇಡಿ ಅನ್ನೋದು ನನ್ನ ಉದ್ದೇಶ ಅಲ್ಲ ಈ ಸಂದರ್ಭದಲ್ಲಿ ಇದು ಸೂಕ್ತ ಅನಿಸ್ತು . ಇನ್ನೂ ಒಂದು ಯಾರು ಬಿಜಿನೆಸ್ ಕಂಪನಿ ಅಥವಾ ಪ್ರೊಡಕ್ಷನ್ ಮಾಡಬೇಕು ಅಂತ ಅಂದುಕೊಂತ ಇರುವ ಯುವಕರು ತಮ್ಮ ನಿರ್ಧಾರ ಸ್ಪಷ್ಟವಾಗಿದ್ದರೆ ಪ್ಲಾನಿಂಗ್ ಮೇಲೆ ಸ್ವಲ್ಪ ವರ್ಕ್ ಮಾಡುವುದು ಬೆಸ್ಟ್ ಅನ್ಸುತ್ತೆ. ಬಿಜಿನೆಸ್  ಆದಮೇಲೆ ಲಾಸ್ ಆಯ್ತು ಅಂತ ಬೇರೆ ಇನ್ನೊಂದು ಬಿಜಿನೆಸ್ ಗೆ ಕೈ ಹಾಕುವುದು ಅಷ್ಟೊಂದು ಸರಿ ಅಂತ ಅನ್ಸಲ್ಲ ಲಾಸ್ ಆಗಲು ಕಾರಣ ಹುಡುಕಿ ಹೇಗೆ ಮಾರ್ಪಾಡು ಮಾಡಿಕೊಳ್ಳಬೇಕು ಅನ್ನುವುದನ್ನು ಯೋಚನೆ ಮಾಡಿದರೆ ಖಂಡಿತ ಲಾಭ ಆಗುತ್ತೆ.
 ನಾನು ಕಳೆದ ಹತ್ತು ವರ್ಷದ ಹಿಂದೆ ಕಲೆಯನ್ನೆ ನಂಬಿಕೊಂಡು ವೃತ್ತಿಯನ್ನು ಕಟ್ಟಿಕೊಳ್ಳಲು ಹೊರಟಾಗ ನನ್ನನ್ನು ನಂಬಿದವರಿಗಿಂತ  ಇವನಿಂದ ಆಗಲ್ಲ ಅಂದುಕೊಂಡವರೇ ಹೆಚ್ಚು ಅಂದು ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ , ನನ್ನ ಸ್ಟುಡಿಯೋ  ಪ್ರಾರಂಭವಾಗಿದ್ದು ಜೀರೋ ಬಜೆಟ್ನಲ್ಲಿ ಈ ಹತ್ತು ವರ್ಷ ಅವಧಿಯಲ್ಲಿ ಕಳೆದುಕೊಂಡಿದ್ದೇನೆ ಪಡೆದುಕೊಂಡಿದ್ದೇನೆ ಎಲ್ಲಿಯೂ ಬೇಸರ ಮಾಡಿಕೊಂಡಿಲ್ಲ ಲಾಸ್ ಮಾಡಿಕೊಂಡಾಗ ಈ ವರ್ಕ್ ನಾನು ಮಾಡಬಾರದಿತ್ತು ಅನಿಸಿಲ್ಲ ಲಾಭ ಆದಾಗ ಸಾಧಿಸಿದ್ದೇನೆ ಅನಿಸಿಲ್ಲ... ನಾನು ಏನನ್ನೋ ಸಾಧಿಸಿದ್ದೇನೆ ಎಂದುಕೊಂಡು ಹೇಳುತ್ತಿಲ್ಲ. ಆದರೆ  ಯಾವುದೊ ಕಂಪನಿಯಲ್ಲಿ ಕೆಲಸ ಮಾಡುವುದಕ್ಕಿಂತ ಸ್ವಂತ ಸಂಸ್ಥೆ ಕಟ್ಟುವುದು ಒಳ್ಳೆಯದು ಅನ್ನಿಸಿದ್ದನ್ನ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.. ಕೆಲವು ವರ್ಷಗಳ ಹಿಂದೆ ನಾವೊಂದು ವಧು-ವರರ ಸಮಾವೇಶ ನಡೆಸಿದ್ದೇವು ಆಗ ಬೆಳಗಾಂ ಮೂಲದ ಸ್ನೇಹಿತರೊಬ್ಬರು ಹೇಳುತ್ತಿದ್ದರು ಅವರದ್ದು ಒಂದು ಶುಗರ್ ಫ್ಯಾಕ್ಟರಿ ಇತ್ತು ಅವರೊಂದಿಗೆ ಕೆಲಸ ಮಾಡುವ ಮೆನೇಜರ್ ಗೆ ಮದುವೆಯಾಗಿತ್ತು ಆದರೆ ಇವರಿಗೆ ಸಮಾಜ ಹುಡುಗಿ ಕೊಡಲು ಹಿಂದೆ ಮುಂದೆ ನೋಡುತ್ತಿತ್ತು ಅಂದರೆ ಸ್ವಂತ ಉದ್ಯೋಗ ಮಾಡುವವರನ್ನು ಇಂದಿನ ಸಮಾಜ ನೋಡುವ ದೃಷ್ಟಿ ಬದಲಾಗಬೇಕಿದೆ. ಚಿತ್ತಾ ಜಿನೇಂದ್ರ ಎಂ ಎಂ

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...